ಕರ್ನಾಟಕ

ಹೊಸಪೇಟೆ: ಸಭೆ-ಸಮಾರಂಭಗಳಿಂದ ದೂರವಿರುವ ಆನಂದ್‌ ಸಿಂಗ್‌ ಪೂಜೆಯಲ್ಲಿ ಭಾಗಿ

ಹೊಸಪೇಟೆ (ವಿಜಯನಗರ): ಸಚಿವ ಆನಂದ್ ಸಿಂಗ್ ಅವರು ಕುಟುಂಬ ಸದಸ್ಯರೊಂದಿಗೆ ಇಲ್ಲಿನ ವೇಣುಗೋಪಾಲ ದೇವಸ್ಥಾನದಲ್ಲಿ ನಡೆಯುತ್ತಿರುವ ದೇವರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

ಆನಂದ್ ಸಿಂಗ್ ಅವರ ಪೂರ್ವಜರಿಗೆ ಸೇರಿದ ಈ ದೇವಸ್ಥಾನದ ಜೀರ್ಣೊದ್ಧಾರ ಪೂರ್ಣಗೊಂಡಿದ್ದು, ಮೂರು ದಿನಗಳಿಂದ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ಬುಧವಾರ ರಾಮ ಲಕ್ಷ್ಮಣ, ಸೀತೆ, ಕಾರ್ತಿಕ, ಗಣೇಶ, ವೆಂಕಟರಮಣ ಮೂರ್ತಿ ಪ್ರತಿಷ್ಠಾಪನೆಯೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ.

ಖಾತೆ ಬದಲಿಸಬೇಕೆಂದು ಬಿಗಿ ಪಟ್ಟು ಹಿಡಿದಿರುವ ಆನಂದ್ ಸಿಂಗ್, ಮೂರು ದಿನಗಳಿಂದ ರಾಜಕೀಯಚಟುವಟಿಕೆ , ಸಭೆ ಸಮಾರಂಭಗಳಿಂದ ದೂರ ಉಳಿದು ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ.

ಮಂಗಳವಾರ ರಾತ್ರಿ ಕಚೇರಿ ಬಂದ್ ಮಾಡಿ, ಅದರ ನಾಮಫಲಕ ತೆರವುಗೊಳಿಸಿದ್ದಾರೆ. ಸಾರ್ವಜನಿಕರ ಅಹವಾಲು ಸ್ವೀಕರಿಸುವುದನ್ನು ನಿಲ್ಲಿಸಿದ್ದಾರೆ. ಅವರ ಬೆಂಬಲಿಗರು, ಆಪ್ತರು ದೇವಸ್ಥಾನ ದಲ್ಲಿದ್ದಾರೆ. ಮಾಧ್ಯಮದವರು ದೇಗುಲದಲ್ಲಿ ಬೀಡು ಬಿಟ್ಟಿದ್ದು, ಅವರ ಮುಂದಿನ ನಡೆ ಬಗ್ಗೆ ತಿಳಿಸುವ ಸಾಧ್ಯತೆ ಇದೆ.

Related Articles

Back to top button