ಕರ್ನಾಟಕಬೆಂಗಳೂರು

ಎಲ್ಲಾ ನಾಯಕರೂ ಮಾತನಾಡಿದ ಮೇಲೆ ಆನಂದ್ ಸಿಂಗ್ ಅವರಿಗೆ ವಿಚಾರ ಮನದಟ್ಟಾಗುತ್ತದೆ ಎಂಬ ವಿಶ್ವಾಸವಿದೆ: ಸಿಎಂ ಬೊಮ್ಮಾಯಿ

ಬೆಂಗಳೂರು: ನಮ್ಮದು ರಾಷ್ಟ್ರೀಯ ಪಕ್ಷ, ಇಲ್ಲಿ ರಾಜ್ಯದ ಮತ್ತು ರಾಷ್ಟ್ರ ಪ್ರಮುಖ ನಾಯಕರು ಸಚಿವ ಆನಂದ್ ಸಿಂಗ್ ಅವರ ಜೊತೆ ಮಾತನಾಡಿದ ಮೇಲೆ ಅವರಿಂದ ಸಕಾರಾತ್ಮಕ ಸ್ಪಂದನೆ ಬರುತ್ತದೆ, ಮುಂದೆ ಒಳ್ಳೆಯದಾಗುತ್ತದೆ ಎಂಬ ವಿಶ್ವಾಸವಿದ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವ ಆನಂದ್ ಸಿಂಗ್ ಹೇಳಿಕೆಗಳಿಗೆ ಉತ್ತರಿಸಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆನಂದ್ ಸಿಂಗ್ ನಾಳೆ ಬರುತ್ತೇನೆ ಎಂದು ಹೇಳಿದ್ದರು, ನಾನು ನಾಳೆ ಮಂಗಳೂರಿಗೆ ಹೋಗುವುದರಿಂದ ನಾಡಿದ್ದು ಅಥವಾ ಇಂದು ಸಂಜೆ ಬಂದು ಭೇಟಿಯಾಗುವ ಸಾಧ್ಯತೆಯಿದೆ, ಹೈಕಮಾಂಡ್ ನಿಂದ ಏನೂ ಸೂಚನೆಯಿಲ್ಲ, ಆನಂದ್ ಸಿಂಗ್ ಅವರ ಬಳಿ ಮಾತನಾಡಿದ ಮೇಲೆ ನಾನು ವರಿಷ್ಠರ ಬಳಿ ಮಾತನಾಡುತ್ತೇನೆ ಎಂದರು.

ಆನಂದ್ ಸಿಂಗ್ ಅವರ ಜೊತೆ ಕುಳಿತು ಸಮಗ್ರವಾಗಿ ಮಾತನಾಡಿ ಸಮಸ್ಯೆ ಬಗೆಹರಿಸುತ್ತೇವೆ. ಇಲ್ಲಿ ನಾನೊಬ್ಬನೇ ಅಲ್ಲ, ಇಡೀ ಪಕ್ಷವಿದೆ. ನಮ್ಮ ರಾಜ್ಯಾಧ್ಯಕ್ಷರು, ಅವರ ಸ್ನೇಹಿತರು ಕೂಡ ಮಾತನಾಡಿದ್ದಾರೆ.

Related Articles

Back to top button