Uncategorized
27 ರ ಬಂದ್ ಗೆ ಸೋಷಿಯಲ್ ಡೆಮೋಕ್ರಟಿಕ್ ಪರ್ಟಿ ಆಫ್ ಇಂಡಿಯಾ SDPI ಬೆಂಬಲ
![](https://4dnews.in/wp-content/uploads/2021/09/sdpi.jpg)
ಮಂಗಳೂರು ಸೆ 27: ಕೇಂದ್ರ ಸರಕಾರ ಜಾರಿಗೆ ತಂದಿರುವ ಕ್ರಿಷಿ ತಿದ್ದುಪಡಿ ಮಸೂದೆ ಸೇರಿದಂತೆ ಹಲವಾರು ಜನವಿರೋಧಿ ನೀತಿಗಳನ್ನು ವಿರೋದಿಸಿ ಸಂಯುಕ್ತ ಕಿಸಾನ್ ಮರ್ಚಾ ಸೆಪ್ಟೆಂಬರ್ 27 ರಂದು ಕರೆನೀಡಿದ ಭಾರತ ಬಂದ್ಗೆ ಸೋಷಿಯಲ್ ಡೆಮೋಕ್ರಟಿಕ್ ಪರ್ಟಿ ಆಫ್ ಇಂಡಿಯಾ (SDPI) ರಾಷ್ಟ್ರೀಯ ಸಮಿತಿಯು ಈಗಾಗಲೇ ಸಂಪರ್ಣ ಬೆಂಬಲ ಸೂಚಿಸಿದ್ದು ಅದರ ಭಾಗವಾಗಿ 27 ರಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಬಿ ಸಿ ರೋಡ್, ಮತ್ತು ಮಂಗಳೂರಿನಲ್ಲಿ ಪಕ್ಷದ ವತಿಯಿಂದ ಪ್ರತಿಭಟನೆ, ಹಕ್ಕೊತ್ತಾಯ ರ್ಯಾಲಿ,ಬೀದಿನಾಟಕ ಗಳನ್ನು ಹಮ್ಮಿಕೊಳ್ಳಲಾಗಿದೆ ಜಿಲ್ಲೆಯ ಎಲ್ಲಾ ಪ್ರಗತಿಪರ ,ಹಾಗೂ ಸಮಾನ ಮನಸ್ಕ ಸಂಘಟನೆಗಳು ಭಾಗವಹಿಸಿ ರೈತರಿಗೆ ನೈತಿಕ ಬೆಂಬಲ ಸೂಚಿಸಬೇಕೆಂದು SDPI ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಅಥಾವುಲ್ಲ ಜೋಕಟ್ಟೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ