ಕರಾವಳಿಮಂಗಳೂರು

ಕೂರತ್ ತಂಙಳ್ ಸ್ಮರಣಾರ್ಥ ಆಂಬುಲೆನ್ಸ್ ಲೋಕಾರ್ಪಣೆ

ಮಂಗಳೂರು: ದಕ ಜಿಲ್ಲಾ ಸಂಯುಕ್ತ ಖಾಝಿಗಳು, ಪ್ರಮುಖ ಧಾರ್ಮಿಕ ವಿದ್ವಾಂಸರಾಗಿದ್ದ ಖುರ್ರತುಸ್ಸಾದಾತ್ ಸಯ್ಯಿದ್ ಕೂರತ್ ತಂಙಳ್ ರವರ ಸ್ಮರಣಾರ್ಥವಾಗಿ ಎನರ್ಜಿಯಾ ಎಂಟಿಸಿ, ಸೌದಿ ಅರೇಬಿಯಾ ಸಿಇಓ, ಯುವ ಉದ್ಯಮಿ ಹಸನ್ ಶಾಹಿದ್ ಅವರ ಎನರ್ಜಿಯಾ ಫೌಂಡೇಶನ್ ಪ್ರಾಯೋಜಕತ್ವದಲ್ಲಿ ತಾಜುಲ್ ಉಲಮಾ ಹೆಲ್ಪ್‌ವಿಂಗ್ ಖುರ್ರತುಸ್ಸಾದಾತ್ ಮೆಮೋರಿಯಲ್ ಫೌಂಡೇಶನ್ (ರಿ) ವತಿಯಿಂದ ನೂತನ ಆಂಬುಲೆನ್ಸ್‌ನ ಲೋಕಾರ್ಪಣೆ ಕಾರ್ಯಕ್ರಮ ಬುಧವಾರ ಮಂಗಳೂರಿನಲ್ಲಿ ನಡೆಯಿತು.

ಸಯ್ಯಿದ್ ಮಶ್‌ಊದ್ ಅಲ್ ಬುಖಾರಿ ಕೂರತ್ ಅಧ್ಯಕ್ಷತೆಯಲ್ಲಿ ವಿಧಾನಸಭೆಯ ಸಭಾಧ್ಯಕ್ಷ ಯುಟಿ ಖಾದರ್ ಲೋಕಾರ್ಪಣೆಗೊಳಿಸಿದರು. ಎಸ್.ಎಂ. ರಶೀದ್ ಹಾಜಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು.

ಹೆಲ್ಪ್‌ವಿಂಗ್ ಅಧ್ಯಕ್ಷ ಖಾಲಿದ್ ಹಾಜಿ ಸ್ವಾಗತಿಸಿದರು.

Related Articles

Back to top button